Slide
Slide
Slide
previous arrow
next arrow

ಆ.26ಕ್ಕೆ ಹೆಗಡೆಕಟ್ಟಾದಲ್ಲಿ ‘ಆರೋಗ್ಯ ಜಾಗೃತಿ ಕಾರ್ಯಾಗಾರ’

300x250 AD

ಶಿರಸಿ: ತಾಲೂಕಿನ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಆ. 26 ಶನಿವಾರ ಮಧ್ಯಾಹ್ನ 4:00 ಗಂಟೆಗೆ ಹೆಗಡೆಕಟ್ಟಾ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ಮತ್ತು ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ‘ಆರೋಗ್ಯ ಜಾಗೃತಿ ಕಾರ್ಯಾಗಾರ’ ನಡೆಯಲಿದೆ. 

ಮುಖ್ಯ ಅತಿಥಿಗಳಾಗಿ ಟಿ.ಎಸ್.ಎಸ್.ಆಸ್ಪತ್ರೆಯ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಮೇಜರ್ ರಘುನಂದನ ಎಸ್. ಹೆಗಡೆ ಆಗಮಿಸಲಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಆರ್ಥೋಪೆಡಿಕ್ಸ್ ವಿಭಾಗದ ಡಾ. ಅರುಣ್ ಶೆಟ್ಟಿ, ಜನರಲ್ ಸರ್ಜನ್ ಡಾ. ವಿಜಯ ಕುಮಾರ, ಗೈನಾಕಾಲಜಿಸ್ಟ್ ಡಾ. ಸ್ವಾತಿ ವಿನಾಯಕ, ಪೀಡಿಯಾಟ್ರಿಶಿಯನ್ ಡಾ. ಆಶಿಶ್ ಜನ್ನು ಉಪಸ್ಥಿತರಿರಲಿದ್ದಾರೆ.

300x250 AD

ಅಧ್ಯಕ್ಷತೆಯನ್ನು ಹೆಗಡೆಕಟ್ಟಾ ಗ್ರೂ. ಗ್ರಾ. ಸೇ. ಸ. ಸಂ. ನಿ., ಹೆಗಡೆಕಟ್ಟಾದ ಅಧ್ಯಕ್ಷ ಎಂ.ಪಿ.ಹೆಗಡೆ ಕೊಟ್ಟೆಗದ್ದೆ ವಹಿಸಲಿದ್ದು, ಸಾರ್ವಜನಿಕರು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಲು ಕೋರಲಾಗಿದೆ.

Share This
300x250 AD
300x250 AD
300x250 AD
Back to top